05/12/2024
ಬಡ ಗ್ರಾಹಕರ ರಕ್ತ ಹೀರಿ ಈ ಮಹಾ ಮಾರಿಗೆ ಸಾಲ ಕೊಟ್ಟು ಆಮೇಲೆ ರೈಟ್ ಆಫ್ ಅಂತೆ. ಅಂದ್ರೆ ಸಾಲ ಮನ್ನಾ ಅಲ್ಲ, ಆದರೆ ಸಾಲ ಯಾವಾಗ ವಾಪಾಸು ಕೊಡುತ್ತಾನೋ ಗೊತ್ತಿಲ್ಲ. ಬ್ಯಾಂಕ್ ನವಾರು ಇವನ ಕಿಸೆಯಲ್ಲಿ ಇರುವಾಗ ಇವನ ಸಾಲ ವಾಪಾಸು ಕೇಳಲಿಕ್ಕೆ ಆಗುತ್ತಾ?
ಇನ್ನು ಬಿಜೆಪಿಗರು ಇವನ ಬೂಟ್ ಗೆ ಪಾಲಿಶ್ ಮಾಡೋರು. ಇನ್ನು ಸಾಲ ವಾಪಾಸ್ ಕೊಡು ಅಂತ ಕೇಳೋಕೆ ಧೈರ್ಯ ಇದೆಯಾ?
ಜನರಿಂದ ಸಾಲ ತಗೊಂಡು
ಹಳ್ಳಿ ಗರ ಬದುಕು ನಾಶ ಮಾಡಿ
ಮತ್ತೆ ಅವರಿಗೆ ಉದ್ಯೋಗ ಕೊಡುತ್ತಾನೆ
ಅಂತೆ. ಅವ ಹೇಳಿದ್ದನ್ನು ನಂಬುವವರು ಒಂದೋ ಅಂಧ ಭಕ್ತರು ಆಗಿರಬೇಕು. ಇಲ್ಲವೋ ಮಂಡೆಯಲ್ಲಿ ಬೊಂಡು ಫಿಕ್ಸ್ ಮಾಡಲು ಆ ದ್ಯಾವರು ಮರೆತಿರಬಹುದು.
ಅಲ್ರೀ ಹಳ್ಳಿಗಳ ಮೇಲೆ ಪವರ್ full ತಂತಿ ಎಳೆದು , ಕೃಷಿ ಭೂಮಿ, ಕಾಡು ನಾಶ ಮಾಡಿ , ಅಲ್ಲಿ ಇದ್ದವರಿಗೆ ಕೆಲಸ ಕೊಡಿಸುತಾನೆ ಅಂತ ಪುಂಗಿ ಬಿಡುತ್ತಾ ಇದ್ದಾನೆ.
ಅಲ್ರೀ ಊರು ಇಡೀ ಶಕ್ತಿ ಶಾಲಿ ವಿದ್ಯುತ್ ನ ಪ್ರಭಾವಳಿ ಇಟ್ಟು ಕೆಲಸ ಮಾಡಿ ಅಂದ್ರೆ ಅಲ್ಲಿ ಹೆಂಗೆ ಮಾರ್ರೆ...
# ಕಡಂದಲೆ ವಿದ್ಯುತ್ ಸ್ಥಾವರ.
ಕೇರಳಕ್ಕೆ ಕರೆಂಟ್ ಬೇಕಂತೆ. ಕರ್ನಾಟಕದವರು ರಿಸ್ಕ್ ತಗೋ ಬೇಕಂತೆ.